ಚಕ್ಶುರ್ಮತಿ: ಕಣ್ಣಿನ ರೆಪ್ಪೆ ಮೇಲಿನ ಹಾಗೂ ಕೆಳಗಿನ ಗೆರೆಗಳನ್ನು ಅಭ್ಯಾಸ ಮಾಡಿ ನಿಖರವಾದ ಭವಿಷ್ಯವನ್ನು ಸಾದರಪಡಿಸುವ ವಿಶಿಷ್ಟ ವಿದ್ಯೆ. ಈ ಗೆರೆಗಳಿಂದ ವ್ಯಕ್ತಿಯ ಸಮಸ್ಯೆಗಳನ್ನು ಸಾದರಪಡಿಸಬಹುದಾಗಿದೆ.
ಸ್ವರ ತರಂಗ:ಗಂಟಲಿನಿಂದ ಹೊರಡುವ ಸಂಗೀತಮಯ ಧ್ವನಿ ತರಂಗಗಳ ಶೈಲಿ ಮತ್ತು ಬದಲಾವಣೆಗಳನ್ನೂ ಗ್ರಹಿಸಿ ಹೇಳುವ ಕರಾರುವಾಕ್ ವಿದ್ಯೆ ಸ್ವರತರಂಗದಿಂದ ವ್ಯಕ್ತಿಯ ಮನೋಭಿತ್ತಿಯಲ್ಲಿ ಹುದುಗಿರುವ ಸಂಕಷ್ಟಗಳ ಸರಮಾಲೆಯನ್ನೇ ಬಿಡಿಸಿಡಬಹುದಾಗಿದೆ.
ಪಾದರಸ ಪಾಂಡಿತ್ಯ: ಪಾದರಸ ಚಲನೆಯುಳ್ಳ ವಸ್ತುವಾಗಿದ್ದು ಭೂಮಿಗೆ ಬಿದ್ದರೆ ಹರಿದುಹೋಗುತ್ತದೆ. ವಾಸ್ತು ದೋಷಕ್ಕೆ ವಿಶಿಷ್ಟ ಪರಿಣಾಮ ಬೀರುವ ಇದು ರಸವಿದ್ಯೆ ಪೂರಕವಾದುದಾಗಿದ್ದು,ಅತ್ಯಂತ ಜಾಗರೂಕತೆಯೀಂದ ಬಳಸಬೇಕು,ಇಲಾದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.ಇದು ಭೂಮಿ ಮತ್ತು ಕುಜನಿಗೆ ಸಂಬಂದಿಸಿದ್ದು.ಪದರಸದಿಂದ ಮನುಷ್ಯನ ಮನಸ್ಸಿನ ಪರಿಣಾಮಗಳನ್ನು ಹೇಳಬಹುದಾಗಿದೆ.
ಹಸ್ತ ಸಾಮುದ್ರಿಕ:ಹಸ್ತದಲ್ಲಿ ಮೂಡಿರುವ ಗೆರೆಗಳು ಆಯಾ ವ್ಯೆಕ್ತಿಯ ಆಗು-ಹೋಗುಗಳನ್ನು ಪ್ರತಿಬಿಂಬಿಸಬಲ್ಲವಗಿದೆ.ಹಸ್ತ ಸಾಮುದ್ರಿಕ ಶಾಸ್ತ್ರವು ಶಾಸ್ತ್ರಿಯ ಮತ್ತು ನೈಜ ಅದ್ಯಯನವಾಗಿದ್ದು ಹಸ್ತದ ರೇಖೆಗಳು ವ್ಯಕ್ತಿಯ ಆಂತರ್ಯ ಮತ್ತು ಚಹರೆಗೆ ಪ್ರತಿಬಿಂಬ ಎನ್ನಬಹುದಾಗಿದೆ.ಹೀಗಾಗಿ ಹಸ್ತದ ರೇಖೆಗಳನ್ನು ಅಬ್ಯಸಿಸಿ ವ್ಯಕ್ತಿಯ ಜೀವನ-ಸಾಧನೆ ,ಎದುರಾಗುವ ತೊಡಕು-ಒದಗುವ ಭ್ಯಾಗ್ಯಗಳನ್ನು ಪಟ್ಟಿಮಾಡಿ ಹೇಳಬಹುದು.
Sort By